ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

CAA SAMACHAR

ಇಮೇಜ್
Okay, ಸಿಎಎ ತುಂಬಾ ದಿನಗಳಿಂದ ಹಾಟ್ ಟಾಪಿಕ್, ಊರಲ್ಲಿ ಕೆಲಸವಿಲ್ಲದೇ ಕುಳಿತು ರಾಜಕೀಯವಾಗಿ ಮಾತನಾಡುವವರಿಂದ ಮೂರೋತ್ತು AC ರೂಮ್ನಲ್ಲಿ ಕುಳಿತ್ಕೊ ಮಹಾನುಭಾವವರೆಗೂ ಒಂದೇ ಮಾತು ನೀನು "ಪರ ಅಥವಾ ವಿರೋಧ'ನಾ? ಪರ ಅಂದರೆ ಒಂದು ಪಕ್ಷ,  ವಿರೋಧ ಅಂದ್ರೆ ಇನ್ನೊಂದು  ಪಕ್ಷ. ಅದ್ಕೆ ತುಂಬಾ ಜನ ಉತ್ತರಿಸುವುದಕ್ಕೆ ಹಿಂಜರಿಯುತ್ತಾರೆ lol...... ಇದು ಬರೀ ರಾಜಕೀಯ ವಿಷಯವಾಗಿದ್ದರೆ ನಾನು ಬರಿತ್ತಿರ್ಲಿಲ್ಲ ಅನಿಸುತ್ತೆ, ಯಾಕಂದ್ರೆ ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ಮೊನ್ನೆ ಒಬ್ಬ ಗೆಳೆಯನನ್ನು ತುಂಬಾ ದಿನಗಳ ನಂತರ ಭೇಟಿಯಾದೆ, ನಾನು ತ್ರಿವೇಣಿಯವರ ಒಂದು ಕಾದಂಬರಿ ಹುಡುಕುತ್ತಿರುವಾಗ "ಹೇಯ್ ಶರಣು" ಅಂತೇ ಕೇಳಿಸಿತು, ತಿರುಗಿ ನೋಡಿದ್ರೆ ಆಶ್ಚರ್ಯ!. ಅವ್ನು   ಸಿಎಎ  ವಿಚಾರವಾಗಿ ಏನಾದ್ರು ಪುಸ್ತಕಗಳು ನೋಡಲು ಬಂದಿದ್ದೀನಿ ಅಂದಾಗ ನಂಗೆ ಆಶ್ಚರ್ಯವಾಯಿತು. ದಿನಾಲು ಬೆಳಿಗ್ಗೆಯಿಂದ ರಾತ್ರಿವರೆಗೂ ಟಿವಿಯಲ್ಲಿ, ನ್ಯೂಸ್ ಪೇಪರಗಳಲ್ಲಿ ನಾನ್ಸ್ಟಾಪ್ ಬರ್ತಿದೆ ಇಲ್ಲೆನಕ್ಕೆ ಹುಡುಕ್ತಿದ್ದಿಯಾ? ಅಂತೇ ಪ್ರಶ್ನಿಸಿದಾಗ ಬಂದ ಉತ್ತರ IAS/KAS ಪ್ರಿಪರೇಷನ್! ಹೌದು  IAS/KAS ಪ್ರಿಪರೇಷನಲ್ಲಿರುವ ತುಂಬಾ ಯುವಕರಿಗೆ ಇದೊಂದು ಹಾಟ್ ಟಾಪಿಕ್. ಟಿವಿ/ನ್ಯೂಸ್ ಅವ್ರಿಗೆ ಆ ಕಡತವನ್ನು ತಿಳಿಸುವುದಕ್ಕಿಂತಾ, ಅರ್ದಂಬರ್ದ ಬರಿದು ಜನಗಳಲ್ಲಿ ಹಾಲ್ಫ್ ನಾಲೆಡ್ಜ್ ಕೊಡ್ತಾರೆ ಅದ್ಕೆ ಕಂಪ್ಲೀಟ್ ಡೀಟೈಲ್ಸ...

MAHA SHIVA RAATRI SHUBHAASHAYAGALU

ಇಮೇಜ್
ಶರಣ ನಿದ್ರೆಗೈದಡೆ ಜಪ ಕಾಣಿರೊ, ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, ಶರಣ ನಡೆದುದೆ ಪಾವನ ಕಾಣಿರೊ, ಶರಣ ನುಡಿದುದೆ ಶಿವತತ್ವ ಕಾಣಿರೊ, ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ.                              ✍️ ಬಸವಣ್ಣ

SHIVAJI MAHARAAJARA JAYANTI SHUBHAASHAYAGALU

ಇಮೇಜ್
ಕನ್ನಡದ ಯುವಕರೆ ಕೇಳಿ ಕಥೆಯೊಂದನ್ನ ನೂರಾರು ವರ್ಷಗಳ ಹಿಂದೆ ಇದ್ದನೊಬ್ಬ ರಾಜ ಧೀರನು ಸೂರನು ಬೆಂಗಳೂರಲ್ಲಿ ಬೆಳೆದವನು ಅವರೇ ನಮ್ಮ ಶಿವಾಜಿ ಮಹಾರಾಜನು ಹೆಮ್ಮೆಯ ಛತ್ರಪತಿ ಶಿವಾಜಿ ಮಹಾರಾಜರು ಜೀಜಾಭಾಯಿಯ ಪ್ರೀತಿಯ ಮಗನು ದಾದಾಜಿ ಕೊಂಡದೇವರ ಹೆಮ್ಮೆಯ ಶಿಷ್ಯನು ಸಂತ ರಾಮದಾಸರ ಪರಮ ಭಕ್ತನು ಅವರೇ ನಮ್ಮ ಶಿವಾಜಿ ಮಹಾರಾಜನು ಹೆಮ್ಮೆಯ ಛತ್ರಪತಿ ಶಿವಾಜಿ ಮಹಾರಾಜರು ವೃದ್ಧ ಮಹಿಳೆಯಿಂದ ತಾಳ್ಮೆಯ ಅರಿತವರು ಜಗವೆಲ್ಲ ಹಿಂದೂ ಧರ್ಮವನ್ನು ಸಾರಿದವರು ಅಪ್ರತಿಮ ಯೋದ, ಸದೃಢ ನಾಯಕ ನಮ್ಮ ಶಿವಾಜಿ ಮಹಾರಾಜರಿಗೆ ಜನ್ಮ ದಿನದ ಶುಭಾಶಯಗಳು.....                   ✍️Sharanu ಶರಣು

Happy Birthday Challenging Star Darshan Sir

ಇಮೇಜ್
ಅಂದು 30/Sep/2011 ದರ್ಶನ ಅವರ ಸಾರಥಿ ಚಿತ್ರ ರಿಲಿಜ್ ಆಗಿತ್ತು, ಆ ಕಡೆ ದರ್ಶನ ಅವ್ರು ಕುಟುಂಬ ಸಮಸ್ಯೆಗಳ ಮದ್ಯ ಬ್ಯುಝಿ ಆಗಿದ್ದರು.. ಅದೇ ಹೊಸದಾಗಿ ಬೆಂಗಳೂರಿಗೆ ಬಂದಿದ್ದ ನಾವು, ತುಂಬಾ ಖುಷಿಯಿಂದ ಮೊದಲ ಷೋ ನೋಡಲೇಬೇಕೆಂದು ತೀರ್ಮಾನಿಸಿದೆವು ಆದರೆ ಕೆಲಸದ ಒತ್ತಡ ಮತ್ತು ದುಡ್ಡಿನ ಅಭಾವದಿಂದ ಮೊದಲ ಷೋ ನೋಡಲು ಹಾಗಲಿಲ್ಲ. ಸಂಡೇ ಬೆಳಿಗ್ಗೆ ಒಬ್ಬ ಗೆಳೆಯನಿಗೆ ಕಾಲ್ ಮಾಡಿ ನರ್ತಕಿ  ಥಿಯೇಟರ್  ಅಲ್ಲಿ ಟಿಕೆಟ್ ರೇಟು ಕೇಳಿ, 100 ರೂಪಾಯಿ ಪಾಕೆಟಲ್ಲಿ ಇಟ್ಟಕೊಂಡು ಒಬ್ಬನೇ ಬಿಎಂಟಿಸಿ ಬಸ್ ಹತ್ತಿದೆ. ದೈತ್ಯ ಪ್ರತಿಭೆ, ಮೇರು ನಟ, ಹಿರಿಯ ಕಲಾವಿದರಾದ ತೂಗುದೀಪ ಶ್ರೀನಿವಾಸ್ ಅವರ ಹೆಸರು ಕೇಳಿದ್ದೆ ಮತ್ತು ಅಲ್ಮೊಸ್ಟ್ ಎಲ್ಲ ಅವರ ಚಿತ್ರಗಳನ್ನು ನೋಡಿದ್ದೆ ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ಅಂತೇ ನಂಗೆ ಗೊತ್ತಾಗಿದ್ದು ಬೆಂಗಳೂರಿಗೆ ಬಂದ ಮೇಲೆ!, ನಾನು ಮೂಲತಃ ಉತ್ತರ ಕರ್ನಾಟಕದ ಭಾಗದವನಾದರಿಂದ ಸಾಮಾನ್ಯವಾಗಿ ದರ್ಶನ ಸರ್ ದೊಡ್ಡ ಅಭಿಮಾನಿ. ಅವರ ಗಜ ಮೂವಿ ಗುಲ್ಬರ್ಗದಲ್ಲಿ ನೋಡಿದ ನೆನಪು ಇನ್ನು ಕಣ್ಣ ಮುಂದೆ ಬರ್ತಿದೆ. ಆ ನೂಕು ನುಗ್ಗಾಟ, ಗೆಳೆಯರ ಜೊತೆ ಹರಟೆ ಒಂದು ಅದ್ಭುತ ನೆನಪು. ಸುಮಾರು 1 ಗಂಟೆಯ ನಂತರ ಮೆಜೆಸ್ಟಿಕ್ ತಲುಪಿದೆ, ಅಂಡರ್ ಗ್ರೌಂಡ್ ಮುಖಾಂತರ ನರ್ತಕಿ ಥಿಯೇಟರ್ ಹತ್ತಿರ ಬಂದೆ. ಮೊದಲು ಸಂತೋಷ್  ಥಿಯೇಟರ್ ಸಿಗುತ್ತೆ, ಸ್ವಲ್ಪ ಒಳಗಡೆ ಹೋದರೆ ನರ್ತಕಿ  ಥಿಯೇಟರ್ ಇ...

SHREE MANJUNATHA - SHARANU - ಶರಣು

ಇಮೇಜ್
ಶ್ರೀ ಮಂಜುನಾಥ , ಶಿವನವತಾರ್ , ಕುಲಕೋಟಿ ಭಕ್ತರನ್ನು ಕಾಪಾಡುವ ಶ್ರೀಕಂಠ ..... ನಿಗೇ ಒಂದು ಭಕ್ತಿಪೂರಕ ಕವನ   ಭೂಲೋಕದ ಚಿರ ಒಡೆಯ ಮಲೆನಾಡಿನ ಮಹಾ ಕುವರ ಧರ್ಮಸ್ಥಳದಲ್ಲಿ ನೆಲೆಸಿರುವ | ಮಂಜುನಾಥ್   ಸ್ವಾಮಿಯೇ , ಕಾದಿರುವೆನು ನಿನಗಾಗಿ ನಿನ್ನ ದರುಷನವ   ಪಡೆಯಲು ..   ಕಾದಿರುವೆನು ನಿನಗಾಗಿ ,  ನಿನ್ನ ದರುಷನವ   ಪಡೆಯಲು ..          ✍ Sharanu  ಶರಣು ಗಿರಿ ಶಿಖರದಿ ನೆಲೆಸಿವನೇ ವಿಷವನ್ನು ಕುಡಿದವನೇ ಗಂಗೆಯನ್ನು ಶಿರದಲ್ಲಿಟ್ಟು ಈ ಜಗವ ಕಾಯಲೆಂದು   ಗಂಗೆಯನ್ನು ಶಿರದಲ್ಲಿಟ್ಟು ಈ ಜಗವ ಕಾಯಲೆಂದು ಧರ್ಮಸ್ಥಳ ಕ್ಷೇತ್ರದಲ್ಲಿ ನಿನ್ನ ದರುಷನವ ನೀಡಿರುವೆ ಕೊಡು ನನಗೂ ಒಂದು ಅವಕಾಶ ನಿನ್ನ ದರುಷನವ ಪಡೆಯಲು ...          ✍ Sharanu  ಶರಣು ಬೇಸಿಗೆಯ ಬಿಸಿಲಲ್ಲಿ ನಿನ್ನ ನೋಡಲು ಬಿಡಲಿಲ್ಲ ಬೇಸಿಗೆಯ ಬಿಸಿಲಲ್ಲಿ ನಿನ್ನ ನೋಡಲು ಬಿಡಲಿಲ್ಲ ಮಳೆಗಾಲದಿ ಮಳೆ ಸುರಿದು ಎಲ್ಲ ದಾರಿಯ ಕೆಡಿಸಿರುವೇ ನಿನ್ನ ದರುಷನವ ಪಡೆಯಲು , ತುದಿಗಾಲಲ್ಲಿ ನಿಂತಿರುವೆ ನಿನ್ನ ದರುಷನವ ಪಡೆಯಲು , ತುದಿಗಾಲಲ್ಲಿ ನಿಂತಿರುವೆ ಕರುಣಿಸ...