ಬಸವಣ್ಣನವರ ನೆನಪುಗಳು
ಬಸವಣ್ಣನವರ ನೆನಪುಗಳು 12ನೇ ಶತಮಾನವನ್ನು ಸುವರ್ಣ ಯುಗ, ಶರಣರ ಯುಗ, ಜ್ಞಾನದ ಯುಗ ಅಂತೇ ಹೇಳಿದರು ತಪ್ಪಾಗಲಾರದು. ಬಸವಣ್ಣನವರು, ಅಕ್ಕಮಹಾದೇವಿ ಹೀಗೆ ಹಲವಾರು ಶರಣರು ಬದುಕಿ ಕನ್ನಡ ನಾಡಿಗೆ ಹೆಸರು ತಂದು ಕೊಟ್ಟ ಯುಗ ಅದು. ಜಗತ್ತಿಗೆ ವಚನ ಸಾಹಿತ್ಯವನ್ನು ಪರಿಚಯಿಸಿದ ಸುವರ್ಣ ಯುಗವದು. ಇಂದು ವಿಶ್ವಗುರು ಬಸವಣ್ಣನವರ ಜಯಂತಿ, ಕೊರೊನಾ ಕಾರಣ ಎಲ್ಲರೂ ಮನೆಯಲ್ಲೇ ಕುಳಿತು ಅವರ ಒಂದಾದರೂ ವಚನವನ್ನು ನೆನಪಿಸಿಕೊಳ್ಳುತ್ತಾ ಅವರ ತತ್ವಗಳು, ಸಿದ್ದಾಂತಗಳನ್ನು ಅಳವಡಿಸೋಳ್ಳೋದು ಪ್ರತಿಯೊಬ್ಬರ ಕರ್ತವ್ಯ. ತಮ್ಮ ಪ್ರಾಣವನ್ನೇ ಲೆಕ್ಕಿಸದೆ 12ನೇ ಶತಮಾನದಲ್ಲಿದ್ದ ಜಾತಿ ಪದ್ಧತಿ/ವ್ಯವಸ್ಥೆ ವಿರುದ್ಧ ಹೋರಾಡಿದ ಮಹಾನ ಶರಣರು. ದುರದೃಷ್ಟಕರ ಅಂದರೆ ಜಾತಿ, ಮೇಲೂ, ಕೀಳು ಇನ್ನು ಕೆಲವೊಂದು ಕಡೆ ಇದೆ ಅಂದರೆ ತಪ್ಪಾಗಲಾರದು. ಕೆಲವು ಕಡೆ ಮನದಲ್ಲಿ ಹೆಮ್ಮರವಾದ ಜಾತಿಯ ಆರಾದನೆವಿದ್ದರು ಮೇಲ್ನೋಟಕ್ಕೆ ಏನು ಇಲ್ಲದ ಹಾಗೆ ನಟನೆಮಾಡುವ ಜನಗಳಿದ್ದಾರೆ. 21ನೇ ಶತಮಾನದಲ್ಲೂ ಅಂತರ್ಜಾತಿ ವಿವಾಹ ಒಂದು ದೊಡ್ಡ ಸವಾಲಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ನಗರಗಲ್ಲಿ ಜಾತಿ ಪದ್ಧತಿ ಸ್ವಲ್ಪ ಕಡಿಮೆ ಇದ್ದರೂ ಜಾತಿಯ ಆರಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಹುಟ್ಟುವ ಮಕ್ಕಳ ಹೆಸರಿನ ಜೊತೆ ತನ್ನ ಜಾತಿಯನ್ನು ಗುರುತಿಸುವ ಹಾಗೆ ನೋಡಿಕೊಳ್ಳುವುದು ಒಂದು ಸಂಪ್ರದಾಯವಾಗಿದೆ. ಸ್ವಲ್ಪ ಜಾತಿಗಳು ಮೇಲ್ವರ್ಗ ಅಂತೇ ಬಿಂಬಿತವಾಗಿ ಕೆಳವರ್ಗ...