ಸಾದು & ಮಂತ್ರಿ
ಒಂದು ಆಸ್ಥಾನದಲ್ಲಿ ಒಬ್ಬ ಮಂತ್ರಿ ಇದ್ದ , ಸರ್ವ ವಿದ್ಯೆಯನ್ನು ಬಲ್ಲವನಾದ ಅವನು ಈ ಜಗತ್ತಲ್ಲಿ ತನಗಿಂತ ಮೇಧಾವಿಗಳು ಯಾರೂ ಇಲ್ಲ , ನಾನೇ ಎಲ್ಲವೆಂದು ಬಿಗುತ್ತಿದ್ದನು . ಒಂದು ದಿನ ಆ ಆಸ್ಥಾನಕ್ಕೆ ಸಾದು ಬರುವನು , ಜನರೆಲ್ಲ ಸಾದುವಿನ ಹತ್ತಿರ ಬಂದು ಆಶೀರ್ವಾದ ಪಡೆದು ಸ್ವಲ್ಪ ಹಿತ ವಚನ ಕೆಳಿ ತೆರಳುತ್ತಿದ್ದರು . ಹೀಗೆ ಕೆಲವು ದಿನಗಳ ಬಳಿಕ ಆಸ್ಥಾನದ ಆ ಮಂತ್ರಿಗೆ ಒಂದು ಆಲೊಚನೆ ಬಂದಿತು . ಆಸ್ಥಾನದ ಜನರೆಲ್ಲ ಈ ಸಾದುವಿನ ಮಾತುಗಳನ್ನು ಕೇಳಿ ಮರಳಾಗುತ್ತಿದ್ದಾರೆ , ನೊಡೊಣ ಒಂದು ಪರೀಕ್ಷೆ ಮಾಡಿ ಬಿಡೋಣ ಅಂತೆ ಮಠದ ಕಡೆ ನಡೆದರು . ಆಕಾಶದಲ್ಲಿ ಮೋಡಗಳು ತುಂಬಿ ಇನ್ನೇನು ವರುಣನ ಆರ್ಭಟ ಜೋರಾಗಿತ್ತು ಅನ್ನುವಷ್ಟರಲ್ಲಿ ಆ ಮಂತ್ರಿ ಮಠವನ್ನು ತಲುಪಿದ . ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ , ಅನ್ನದಾಸೋಹ , ಸ್ವಚ್ಚತೆ ಮತ್ತು ಭಕ್ತಿಯನ್ನು ನೊಡಿ ಮನದಲ್ಲಿ ಏನೋ ಸಮಾಧಾನದ ನಿಟ್ಟಿಸಿರು , ಆ ಸಾದುವಿನ ಹತ್ತಿರ ಹೊಗಿ ತಮ್ಮ ಕಿರು ಪರಿಚಯ ಮಾಡಿಕೊಂಡರು . ಹಾಗೆಯೇ ಎಷ್ಟೋ ಸಮಯದ ನಂತರ ಈ ಸಾಧುವಿನ ಪರೀಕ್ಷಿಸುವ ಸಮಯ ಬಂದಿತೆಂದು ಒಂದು ಪ್ರಶ್ನೆಯನ್ನು ಕೆಳಿದರು : ಮಂತ್ರಿ : “ ಮಹಾ ಸ್ವಾಮಿಜಿ , ನಿಮ್ಮ ಬಗ್ಗೆ ನಾನು ಇಲ್ಲಿಯವರೆಗೆ ಬರಿ ಅವರಿವರ ಬಾಯಿಯಲ್ಲಿ ಕೇಳಿದ್ದೆ ಆದರೆ...